Monday, June 12, 2017

                                     ಸಂಭ್ರಮದ ಶಾಲಾ ಪ್ರಾರಂಭೋತ್ಸವ
ನಮ್ಮ ಶಾಲೆಯಲ್ಲಿ ಬೇಸಗೆಯ ಸುದೀರ್ಘ ರಜಾ ಅನುಭವದ ನಂತರ ೨೦೧೭-೧೮ರ ನೂತನ ಶೈಕ್ಷಣಿಕ ವರ್ಷಕ್ಕೆ ಆಗಮಿಸುವ ಪುಟಾಣಿ ಮಕ್ಕಳನ್ನೂ, ಹಿರಿಯ ಮಕ್ಕಳನ್ನೂ, ಶಿಕ್ಷಕ-ರಕ್ಷಕ ಬಳಗವನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸುವ ಶಾಲಾ ಪ್ರವೇಶೋತ್ಸವವನ್ನು ವೈವಿಧ್ಯಮಯವಾಗಿ ಶಾಲೆಯಲ್ಲಿ ಆಚರಿಸಲಾತು. ಶಾಲಾ ರೇಡಿಯೋ ಕೇಂದ್ರ 'ಸ್ವರ್ಗ ತರಂಗ' ದ ಮೂಲಕ ಪ್ರವೇಶೋತ್ಸವ ಗೀತೆಯನ್ನು ಕೇಳಿಸಲಾತು. ನಂತರ ಭವ್ಯ ಮೆರವಣಿಗೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್ ಹಾಗೂ ಪಂಚಾಯತ್ ಸದಸ್ಯೆ ಕು|ಚಂದ್ರಾವತಿ ಇವರು ಪ್ರವೇಶೋತ್ಸವ ಬ್ಯಾನರನ್ನು ಮಕ್ಕಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಸ್ಥಳೀಯ ಶಾಸ್ತಾ ಕ್ಲಬ್‌ನ ಸದಸ್ಯರಿಂದ ನ್ಯಾಸಿಕ್ ಬ್ಯಾಂಡ್ ಕೇರಳೀಯ ಉಡುಪನ್ನು ಧರಿಸಿದ ವಿದ್ಯಾರ್ಥಿನಿಯರು ಪುಗ್ಗೆ, ಡಿಸ್ ಪ್ಲೇ ಕೋಲುಗಳನ್ನು ಹಿಡಿದ ಮಕ್ಕಳ ದಂಡು ವಿಶೇಷವಾದ ಮೆರವಣಿಗೆಗೆ ಮೆರುಗನ್ನು ನೀಡುವುದರ ಮೂಲಕ ಮನೋರಂಜನೆತ್ತರು. ನಂತರ ನವಾಗತ ಮಕ್ಕಳಿಗೆ ಶಾಲಾ ಅಧ್ಯಾಪಿಕೆಯರು ಆರತಿಯನ್ನು ಬೆಳಗಿ ಹಣೆಗೆ ತಿಲಕವನ್ನು ಇಟ್ಟು ಸ್ವಾಗತಿಸಿದರು. ಮಕ್ಕಳು ವಿದ್ಯಾಧಿದೇವತೆಗೆ ಪುಷ್ಪಾರ್ಚನೆಯನ್ನು ಮಾಡಿ ನಮಸ್ಕರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತೃಸಂಘದ ಅಧ್ಯಕ್ಷೆ  ಶ್ರೀಮತಿ ಮಂಜರಿ ನವೀನ್ ರವರು ಮಕ್ಕಳು ಆಟಪಾಠದ ಜೊತೆಗೆ ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮವಾಗಿ ವಿದ್ಯಾರ್ಥಿಜೀವನವನ್ನು ಹೊಂದಬಹುದು ಎಂದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ ವಿ.ಎಸ್‌ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ೧ನೇ ತರಗತಿಯ ಮಕ್ಕಳಿಗೆ ಶ್ರೀಮತಿ ಮತ್ತು ಶ್ರೀ ಅರುಣ್ ಕುಮಾರ್ ವಾಲ್ತಾಜೆ ಬೆಂಗಳೂರು ಇವರ ಕೊಡುಗೆಯಾಗಿ ನೀಡಿದ ಸ್ಲೇಟು, ಬ್ಯಾಗ್‌ಗಳನ್ನು ವಿತರಿಸಲಾಯಿತು. ಶಿಕ್ಷಕ ಶ್ರೀ ಸಚ್ಚಿದಾನಂದ ಎಸ್ ರವರು ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾ ಕುಮಾರಿ ಯವರು ಸ್ವಾಗತಿಸಿ, ಶಿಕ್ಷಕ ಎಸ್.ಎನ್ ವೆಂಕಟವಿದ್ಯಾಸಾಗರ ರವರು ವಂದಿಸಿದರು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರೆಲ್ಲರೂ ಕಪ್ಪು ಪಟ್ಟಿಯನ್ನು ಧರಿಸುವುದರ ಮೂಲಕ ಮಲಯಾಳ ಕಡ್ಡಾಯ ಹೇರಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ. ಗೀತಾಕುಮಾರಿ ಯವರು ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಿದರು.







Tuesday, March 28, 2017

Monday, March 27, 2017

    'ವಿಶ್ವ  ಮಹಿಳಾ ದಿನ'



ವಿಜ್ಞಾನ ದಿನ

'ಶಾಸ್ತ್ರೋತ್ಸವ  ೨೦೧೭'










 

                                           'ಹಲೋ ಇಂಗ್ಲಿಷ್ ಶಿಬಿರ'






























                          ಸಂಸ್ಕೃತ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳು




           
               ªÀÄPÀ̼À ¥ÀæªÁ¸À PÉgÉAiÀÄ zÀqÀzÀ°è


                                                                  ಗಣರಾಜ್ಯೋತ್ಸವ 





Saturday, January 28, 2017

                                                   
                                                ಹರಿತ ಕೇರಳ ದಿನ 




             ನಮ್ಮ ಶಾಲೆಯಲ್ಲಿ ದ್ವಿದಿನ ಸಹವಾಸ ಶಿಬಿರ

 
                     ನಮ್ಮ  ಶಾಲೆಯ  ಸಂಭ್ರಮದ ವಾರ್ಷಿಕೋತ್ಸವ 





 



         ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞ
ನಮ್ಮ  ಶಾಲೆಯಲ್ಲಿ ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞವು ನಡೆತು. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ, ಮಣ್ಣಿನ ಫಲವತ್ತತೆ, ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು. ನೀರನ್ನು ಕಲುತಗೊಳಿಸುವುದರ ಜೊತೆಗೆ ನಾನಾ ರೋಗಗಳಿಗೆ ನಾಂದಿ ಹಾಡುವುದು, ಉರಿಸುವುದರಿಂದ ವಾಯು ಮಾಲಿನ್ಯದ ಜೊತೆಗೆ ಓಝೋನ್ ಪದರಕ್ಕೂ ಹಾನಿ  ಮಾಡುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆಗೆ ಕೊನೆ ಎನ್ನುವುದಿಲ್ಲ. ಆದರೂ ನಾವು ಉಪಯೋಗಿಸುವ ಪ್ಲಾಸ್ಟಿಕ್‌ಗೆ ಮಿತಿಯೇ ಇಲ್ಲ. 'ಪರಿಸರಕ್ಕೆ ಮಾರಕವಾಗಿರುವ  ಪ್ಲಾಸ್ಟಿಕ್  ಬಳಕೆಗೆ ಮಿತಿರಲಿ'.  ಮದ್ಯ ಮಾದಕ  ವಸ್ತುಗಳು,  ಸಮಾಜ ದ್ರೋಹಿ ಚಟುವಟಿಕೆಗಳು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ  ಮೇಲೆ  ಯಾವುದೇ ಪರಿಣಾಮವನ್ನು ಬೀರದಂತೆ ಜಾಗೃತಗೊಳಿಸುವುದು.  ಈ ಸಂದೇಶವನ್ನು ಮಕ್ಕಳಿಗೆ ಮನದಟ್ಟು  ಮಾಡಲು  ಶಾಲಾ  ಎಸ್ಸೆಂಬ್ಲಿಯಲ್ಲಿ  ಶಾಲಾ  ಮುಖ್ಯೋಪಾಧ್ಯಾಯ      ಪಿ ಶಿವರಾಮ್ ಭಟ್ ಇವರು ಪ್ರತಿಜ್ಞೆಯನ್ನು ಮಂಡಿಸಿದರು. ವಿಜ್ಞಾನ ಶಿಕ್ಷಕ ವೆಂಕಟ ವಿದ್ಯಾಸಾಗರ್ ರವರು ಈ ವಿಚಾರವಾಗಿ ಸಾಕಷ್ಟು ಮಾಹಿತಿಯನ್ನು ಮಕ್ಕಳಿಗಿತ್ತರು. ನಂತರ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಪರಿಸರವನ್ನು ಶುಚಿಗೊಳಿಸಿದರು.  
 
ಹಾಗೆಯೇ ನಮ್ಮ  ಶಾಲೆಯಲ್ಲಿ ಶಾಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಂರಕ್ಷಣಾ ಯಜ್ಞವು ರಕ್ಷಕ ಶಿಕ್ಷಕ ಸಂಘ, ವಿವಿಧ ಕ್ಲಬ್‌ಗಳ ಸಹಕಾರದೊಂದಿಗೆ ನಡೆತು. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ, ಮಣ್ಣಿನ ಫಲವತ್ತತೆ, ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು. ನೀರನ್ನು ಕಲುತಗೊಳಿಸುವುದರ ಜೊತೆಗೆ ನಾನಾ ರೋಗಗಳಿಗೆ ನಾಂದಿ ಹಾಡುವುದು, ಉರಿಸುವುದರಿಂದ ವಾಯು ಮಾಲಿನ್ಯದ ಜೊತೆಗೆ ಓಝೋನ್ ಪದರಕ್ಕೂ ಹಾನಿ  ಮಾಡುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆಗೆ ಕೊನೆ ಎನ್ನುವುದಿಲ್ಲ. ಆದರೂ ನಾವು ಉಪಯೋಗಿಸುವ ಪ್ಲಾಸ್ಟಿಕ್‌ಗೆ ಮಿ ತಿಯೇ ಇಲ್ಲ . 'ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಮಿತಿರಲಿ'. ಮದ್ಯ ಮಾದಕ ವಸ್ತುಗಳು, ಸಮಾಜ ದ್ರೋಹಿ ಚಟುವಟಿಕೆಗಳು , ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೇಲೆ ಯಾವುದೇ ಪರಿಣಾಮವನ್ನು ಬೀರದಂತೆ ಜಾಗೃತಗೊಳಿಸುವುದು. ಕೇರಳದ  ಸಾಮಾಜಿಕ  ಅಭಿವೃದ್ಧಿಗೆ  ಮೈಲುಗಲ್ಲಾಗಿರುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉತ್ತಮ ಗುಣಮಟ್ಟದವುಗಳನ್ನಾಗಿಸುವ ಮಹಾಯಜ್ಞಕ್ಕೆ ಪ್ರತಿಜ್ಞೆಯನ್ನು ಸ್ವೀಕರಿಸಲಾತು.

ಈ ವಿಚಾರದ  ಕುರಿತಾಗಿ  ಮಾಹಿತಿಯನ್ನು ಶಾಲಾ ರಕ್ಷಕ ಶಿಕ್ಷಕರಿಗೆ ಹಾಗೂ ವಿವಿಧ ಕ್ಲಬ್ ಗಳ ಸದಸ್ಯರಿಗೆ ಶಾಲಾ ಶಿಕ್ಷಕ ಶ್ರೀ ಸಚ್ಚಿದಾನಂದ  ಇವರು  ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಲಾತು.
ಹಾಗೇಯೇ ಪಂಚಾಯತ್ ಸದಸ್ಯೆ ಕು| ಚಂದ್ರಾವತಿ ಎಂ, ಪಿ.ಟಿ.ಎ ಅಧ್ಯಕ್ಷೆ ಸುಚಿತ್ರಾ ಮುಂಗ್ಲಿಕಾನ, ಶಾಲಾ ಮುಖ್ಯೋಪಾಧ್ಯಾಯ ಪಿ ಶಿವರಾಮ್ ಭಟ್ ಉಪಸ್ಥಿತರಿದ್ದರು.  ನಂತರ ರಕ್ಷಕ ಶಿಕ್ಷಕ ಸಂಘ,ವಿವಿಧ ಕ್ಲಬ್‌ಗಳು ಶಾಲಾ ಪರಿಸರವನ್ನು ಶುಚಿಗೊಳಿಸಿದರು. 

 
 
                             
                          










Friday, October 21, 2016



                                              ಗಾಂಧೀ, ಶಾಸ್ತ್ರಿ ಜನ್ಮದಿನಾಚರಣೆ 

ನಮ್ಮ ಶಾಲೆಯಲ್ಲಿ ಸುಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಈ ಮಹಾನ್ ವ್ಯಕ್ತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈದರು. ಈ ಸಂದರ್ಭದಲ್ಲಿ ಅವರು ಅಹಿಂಸೆ, ಸರಳತೆ, ಶುಚಿತ್ವ ಗಾಂಧೀಜಿಯವರ ವ್ಯಕ್ತಿತ್ವದ ಪ್ರಮುಖ ಗುಣಗಳು ಅದೇ ರೀತಿ ಶಾಸ್ತ್ರಿ ಯವರ ಜೀವನದ ಕೆಲವು ಮುಖ್ಯ ಪ್ರಸಂಗಗಳನ್ನು ನೆನಪಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ ರವರು ಗಾಂಧೀಜಿಯವರ ಪ್ರಾರ್ಥನಾ ಶ್ಲೋಕವಾದ ರಘುಪತಿ ರಾಘವ ಎಂಬ ಗೀತೆಯನ್ನು ಹಾಡಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಶ್ರುತಿ ಕೆ ಗಾಂಧೀಜಿಯವರ ಹಾಗೂ ಮಾಸ್ಟರ್ ಆಶ್ರಿತ್ ವೈ ಶಾಸ್ತ್ರಿ ಯವರ ವ್ಯಕ್ತಿ ಪರಿಚಯವನ್ನು ಮಂಡಿಸಿದರು. ಸೇವಾ ದಿನದ ಅಂಗವಾಗಿ ಶಾಲಾ ಪರಿಸರವನ್ನು ಶಿಕ್ಷರು ಮಕ್ಕಳು ಸೇರಿಕೊಂಡು ಸ್ವಚ್ಛಗೊಳಿಸಲಾತು.



Thursday, September 29, 2016

                               
                                       ಓಣಂ ಆಚರಣೆ
ನಮ್ಮಶಾಲೆಯಲ್ಲಿ ಜರಗಿದ ಓಣಂ ಆಚರಣೆಯಲ್ಲಿ ಮಹಾಬಲಿಯಾಗಿ ಪ್ರಥಮ್ ಬಿ.ಕೆ, ಪ್ರತಿ ತರಗತಿಯಲ್ಲೂ ರಂಜಿಸಿದ ಹೂವಿನ ಪೂವಲಿ, ಮಕ್ಕಳ ಹೆತ್ತವರ ರಂಜಿಸಿದ ಓಣಂಕಲಿ, ಹಗ್ಗ ಜಗ್ಗಾಟ, ಭೂರಿ ಭೋಜನದೊಂದಿಗೆ ಓಣ ಸದ್ಯ. 


Friday, September 9, 2016


                                   
                              ಶಿಕ್ಷಕರ ಸ್ವ ಗೃಹದಲ್ಲಿ ಶಿಕ್ಷಕ ದಿನಾಚರಣೆ

ನಮ್ಮಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ, ಶಾಲೆಯಲ್ಲಿ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮ ಟೀಚರ್ ರವರ ಬಗ್ಗೆ ಗುರುವಂದನಂ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇನ್ನೋರ್ವ ಶಿಕ್ಷಕ ಶಾಲಾ ಹಳೇ ವಿದ್ಯಾರ್ಥಿ ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತ ಶಿಕ್ಷಕ ಎಸ್.ಕೆ ಸುಬ್ರಹ್ಮಣ್ಯ ಭಟ್ ಪಾಲ್ತಮೂಲೆ ಇವರ ಸ್ವ ಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲಪುಷ್ಪ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತನ್ನ ಬಾಲ್ಯ ಕಾಲದ ಸವಿ ಅನುಭವವನ್ನು ನೆನಪಿಸುತ್ತಾ ಮಕ್ಕಳಿಗೆ ನೀಡುವ ಪ್ರೋತ್ಸಾಹವೇ ಕಲಿಕೆಯ ಔನತ್ಯಕ್ಕೆ ಮೂಲ ಭಯರಹಿತ ವಾತಾವರಣವನ್ನು ರೂಪಿಸುವುದರಿಂದ ಮಕ್ಕಳಿಗೆ ಕಲಿಕೆ ಆಸಕ್ತಿದಾಯಕವಾಗಲು ಸಾಧ್ಯ ಹಾಗೂ ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್ ರವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಬಿ. ವಂದಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಾಕ್ಷ ಶ್ರೀ ಶ್ರೀಧರ್ ಭಟ್ ಸಜಂಗದ್ದೆ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.







                              ನಮ್ಮ ಶಾಲೆಯಲ್ಲಿ ಶಾಲಾ ತರಕಾರಿ ತೋಟದಲ್ಲಿ ಬೆಳೆದ ಸುಮಾರು ೩೦ ಕೆ.ಜಿ ತೂಕದ ಬೃಹಾದಾಕಾರದಲ್ಲಿ ಬೆಳೆದ ಬಾಳೆಗೊನೆಯೊಂದಿಗೆ ಇಕೋ ಕ್ಲಬಿನ ಸದಸ್ಯರು, ಶಿಕ್ಷಕ ಶ್ರೀ ಪದ್ಮನಾಭ ಆರ್ ಹಾಗೂ ಕೃಷಿ ಚಟುವಟಿಕೆಯಲ್ಲಿ ಮಕ್ಕಳನ್ನು ನಿತ್ಯ ತೊಡಗಿಸಿಕೊಂಡು ಮಾರ್ಗದರ್ಶನ ನೀಡುವ ಶಾಲಾ ಸಿಬ್ಬಂದಿ ರಾಧಾಕೃಷ್ಣ ಎಸ್ ರವರು.






                                  
                          ನಮ್ಮ ಶಾಲೆಯಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳಿಗೆ ಕೃಷ್ಣ ಭಕ್ತಿಗೀತೆ, ಭಗವದ್ಗೀತಾ ಕಂಠಪಾಠ, ಪುರಾಣ ಕ್ವಿಜ್, ಗೋಬಾಲ ರಚನೆ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮಭಟ್ ರವರು ಶಾಲಾ ಎಸೆಂಬ್ಲಿಯಲ್ಲಿ ಬಹುಮಾನವನ್ನು ವಿತರಿಸಿದರು.